ಭಾರತದ ಮಹಾಗ್ರಂಥಗಳಲ್ಲಿ ಒಂದಾದ ರಾಮಾಯಣದಲ್ಲಿಯೇ ರಾಗಿಯ ಮಹತ್ವ ಸಾರುವ ಕಥೆ ಇದೆ. ಕನಕದಾಸರು ಅದನ್ನೇ ತಮ್ಮ ರಾಮಧಾನ್ಯ ಚರಿತೆಯಲ್ಲಿ ಬರೆದಿದ್ದಾರೆ. ರಾಮನ ಓಲಗದಲ್ಲೊಮ್ಮೆ ರಾಗಿ ಶ್ರೇಷ್ಠವೋ, ಭತ್ತ ಶ್ರೇಷ್ಠವೋ ಎಂಬ ಚರ್ಚೆ ಮೊದಲಾಯಿತು. ಈ ವಾಗ್ವಾದಲ್ಲಿ ಸ್ವತಃ ರಾಗಿ ಮತ್ತು ಭತ್ತಗಳೂ ಪಾಲ್ಗೊಂಡು ತಮ್ಮ ತಮ್ಮ ಹಿರಿಮೆ ಗರಿಮೆಯನ್ನು ಹೇಳಿಕೊಂಡವು. ಇದನ್ನು ಆಲಿಸಿದ ರಾಮ- ಯಾವ ತೀರ್ಪನ್ನೂ ನೀಡದೆ ಇವುಗಳನ್ನು ಆರು ತಿಂಗಳ ಕಾಲ ಒಂದೆಡೆ ಇಡಿ ಎಂದ. ಆರು ತಿಂಗಳ ನಂತರ ಈ ಎರಡೂ ಧಾನ್ಯಗಳನ್ನು ವೀಕ್ಷಿಸಿದಾಗ ಅಕ್ಕಿ ಮುಗ್ಗಿಹೋಗಿತ್ತು. ರಾಗಿ ಸದೃಢವಾಗಿತ್ತು. ಕೊನೆಗೆ ರಾಮ, ರಾಗಿಯೇ ಶ್ರೇಷ್ಠ ಎಂದು ತೀರ್ಪು ನೀಡಿದ. ರಾಗಿಯನ್ನು ಮಾನ್ಯ ಮಾಡಿದ್ದಕ್ಕೆ ಆತ ‘ರಾಘವ’ ಎಂದು ಹೆಸರಾದ ಎನ್ನುತ್ತಾರೆ ಕನಕದಾಸರು. ಅದಕ್ಕೆ ನಮ್ಮ ಪೂರ್ವಿಕರು ‘ಹಿಟ್ಟಂ ತಿಂದವ ಬೆಟ್ಟವಂ ಕಿತ್ತಿಟ್ಟ’ ಎನ್ನುತ್ತಾರೆ. ಅಂದರೆ, ರಾಗಿ ಮುದ್ದೆ ಉಂಡವ ಬೆಟ್ಟ ಕಿತ್ತಿಡುವಷ್ಟು ಬಲಶಾಲಿಯಾಗಿರುತ್ತಾನೆ ಎಂಬುದು ಅವರ ಮಾತಿನ ಸಾರ.
ರಾಗಿ ಬೇಸಾಯದಲ್ಲಿ ಭಾರತಕ್ಕೆ ಅಗ್ರಸ್ಥಾನವಿದೆ. ಕರ್ನಾಟಕ ಬಿಟ್ಟರೆ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರದಲ್ಲೂ ರಾಗಿ ಪ್ರಮುಖ ಬೆಳೆ.
ರಾಗಿಯ ಕಾಳು ಉಳಿದ ಆಹಾರ ಧಾನ್ಯಗಳಿಗಿಂತ ಸಣ್ಣದಾಗಿರುತ್ತದೆ ಮತ್ತು ಗಟ್ಟಿಯಾಗಿರುತ್ತದೆ. ಕೆಂಪು ಇಲ್ಲವೇ ಕಂದು ಬಣ್ಣದಿಂದ ಕೂಡಿರುವ ರಾಗಿಯಲ್ಲಿ ಪ್ರೊಟೀನಗ್ .ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ನಾರು, ಸೋಡಿಯಂ . ಪೊಟ್ಯಾಶಿಯಂ. ಗಂಧಕ ಅಂಶಗಳು ಇವೆ.
ಈ ರಾಗಿ ಹೆಚ್ಚಿನವರಿಗೆ ಇಷ್ಟ ವಾಗುವುದಿಲ್ಲ ಏಕೆಂದರೆ ಅದು ಸಪ್ಪೆಯಾಗಿರುತ್ತದೆ.ಕಪ್ಪು ಬಣ್ಣದಲ್ಲಿ ಇದೆ ಎಂದು ಯಾರು ಅಷ್ಟು ಇಷ್ಟ ಪಡುವುದಿಲ್ಲ ಆದರೆ ಹಿಂದಿನ ಕಾಲದ ಜನರಿಗೆ ರಾಗಿ ಬಿಟ್ಟರೆ ಬೇರೆ ಆಹಾರಗಳೇ ಬೇಡವಾಗಿತ್ತು.ಅದಕ್ಕಾಗಿ ಅವರು ತುಂಬಾ ಗಟ್ಟಿಮುಟ್ಟಾಗಿ. ಯಾವುದೇ ರೋಗಗಳು ಇಲ್ಲದೆ ತುಂಬಾ ಆರೋಗ್ಯವಾಗಿದ್ದರು.
ಹಿಂದಿನ ಕಾಲದಲ್ಲಿ ಬೆಳಿಗ್ಗೆ ಎದ್ದು ರಾಗಿಮುದ್ದೆ ತಿಂದು ಅವರ ಅವರ ಮುಂದಿನ ಕೆಲಸಕ್ಕೆ ಹೋಗುತ್ತಿದ್ದರು.ಇನ್ನು ಅವರ ಕೆಲಸ ಮುಗಿಸಿ ಬರುವುದು ಸಂಜೆ. ಬೆಳಿಗ್ಗೆಯಿಂದ ಸಂಜೆಯ ವರೆಗೂ ಅವರು ಯಾವುದೇ ಸುಸ್ತು. ಹಸಿವು. ಸಂಕಟ ಗಳು ಇಲ್ಲದೆ ಕೆಲಸ ಮಾಡುತ್ತಿದ್ದರು ಅದಕ್ಕೆ ಕಾರಣ ಅವರ ರಾಗಿಮುದ್ದೆ. ಹಾಗಾದರೇ ಈ ರಾಗಿಮುದ್ದೆಯಲ್ಲಿ
ಹಾಗಾದರೆ ಈ ರಾಗಿಯಲ್ಲಿ ಯಾವ ಅಂಶಗಳಿವೆ. ಈ ರಾಗಿಮುದ್ದೆ ಸೇವನೆಯಿಂದ ಆಗುವ ಉಪಯೋಗವೇನು ನೋಡೋಣ ಬನ್ನಿ
ಈ ರಾಗಿಯಿಂದ ಮುದ್ದೆ. ಅಂಬಲಿ. ರೊಟ್ಟಿ. ಉಪ್ಪಿಟ್ಟು. ದೋಸೆ. ಇಡ್ಲಿ .ಸಿಹಿ ತಿಂಡಿಗಳನ್ನು ಮಾಡಬಹುದು.
ಈ ರಾಗಿ ಹಿಟ್ಟಿನಿಂದ ಮಾಡಿದ ಮುದ್ದೆಯನ್ನು ಸೇವಿಸಿದರೆ ಮಧುಮೇಹ ಹತ್ತಿರ ಸುಳಿಯುವುದಿಲ್ಲ.
ಮಕ್ಕಳ ಪೌಷ್ಟಿಕ ಆಹಾರವೆಂದರೆ ರಾಗಿ.ಇದು ತುಂಬಾ ವಿಟಮಿನ್ಗಳನ್ನು ಒಳಗೊಂಡಿರುವ ಆಹಾರ. ಇದನ್ನು ಬಳಸಿ ಒಟ್ಟರಾಗಿಹಿಟ್ಟು ತಾಯಾರಿಸಿ ಮಕ್ಕಳಿಗೆ ತಿನ್ನಿಸುವುದರಿಂದ ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ. ಜೊತೆಗೆ ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ.ಮಕ್ಕಳು ತುಂಬಾ ಗಟ್ಟಿಯಾಗಿ ಶಕ್ತಿಯಿಂದ ಇರುತ್ತಾರೆ.
ರಾಗಿಮುದ್ದೆಯ ಸೇವನೆಯಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
ರಾಗಿಮುದ್ದೆಯಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ. ಅಂಶವಿದ್ದು ಇದರ ಸೇವನೆಯಿಂದ ಮೂಳೆಗಳನ್ನು ಬಲಪಡಿಸಲು ಸಹಾಯಕವಾಗುತ್ತದೆ.
ರಾಗಿಮುದ್ದೆಯಲ್ಲಿ ಅಮಿನೊ ಎಸಿಡ್ ಲೆಸಿತಿನ್ ಹಾಗೂ ಮೇಥೋನಿನ್ ನಿಮ್ಮ ಜೀರ್ಣಾಂಗವೂಹದಲ್ಲಿ ಇರುವ ಹೆಚ್ಚಿನ ಕೊಬ್ಬಿನಂಶವನ್ನು. ಕೊಲೆಸ್ಟ್ರಾಲ್ ಅನ್ನು ಕಡಿಮೆಮಾಡುತ್ತದೆ.
ಒತ್ತಡಗಳಿಂದ ಮನಸ್ಸು ನೊಂದಿದರೆ ಮನಸ್ಸಿಗೆ ನೆಮ್ಮದಿ ಸಿಗಲು ನಿಮ್ಮ ಆಹಾರ ರಾಗಿಮುದ್ದೆಯಾಗಿರಲಿ.
ರಾಗಿಮುದ್ದೆಯು ಬೇಸಿಗೆಯಲ್ಲಿ ಉತ್ತಮ ಆಹಾರ ಇದರಲ್ಲಿ ತಂಪು ಮಾಡುವ ಎಲ್ಲ ಶಕ್ತಿಯು ಇದೆ ಆದ್ದರಿಂದ ಬೇಸಿಗೆಯಲ್ಲಿ ಹೆಚ್ಚು ರಾಗಿಮುದ್ದೆ ಸೇವಿಸಿ.
ರಾಗಿಮುದ್ದೆಯಲ್ಲಿ ಪ್ರೊಟೀನ್ ಮತ್ತು ವಿಟಮಿನ್ ಗಳು ಇದ್ದು ಇದರ ಸೇವನೆ ನಮ್ಮ ದೇಹವನ್ನು ಬಲಪಡಿಸುತ್ತದೆ.ಮತ್ತು ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸುತ್ತದೆ.
ರಾಗಿಮುದ್ದೆಯಲ್ಲಿರುವ ಫೈಬರ್ ಗುಣ ಮಲಬದ್ಧತೆ ಸಮಸ್ಯೆಯನ್ನು ದೂರಮಾಡುತ್ತದೆ.
ಥೈರಾಯ್ಡ್ ಸಮಸ್ಯಯಿಂದ ಬಳಲುತ್ತಿದ್ದರೆ ಅವರಿಗೆ ರಾಗಿಮುದ್ದೆ ಉತ್ತಮ ಔಷಧವಾಗಿರುತ್ತದೆ.
ಹಿಮೋಗ್ಲೋಬಿನ್ ಮಟ್ಟವನ್ನು ಸುಧಾರಿಸಲು ಮತ್ತು ಹಾಲಿನ ಉತ್ಪಾದನೆ ಹೆಚ್ಚಿಸಿಕೊಳ್ಳಲು ತಾಯಂದಿರಿಗೆ ಉತ್ತಮ ಆಹಾರವಾಗಿ ರಾಗಿಮುದ್ದೆ ಕೊಡಿ.
ರಾಗಿಮುದ್ದೆಯ ಸೇವನೆಯು ನಮ್ಮ ಹಸಿವನ್ನು ಕಡಿಮೆ ಮಾಡುತ್ತದೆ.
ದಿನನಿತ್ಯ ರಾಗಿಯ ಗಂಜಿ ಮಾಡಿಕೊಂಡು ಮಜ್ಜಿಗೆ ಅಥವಾ ಮೊಸರು ಸೇರಿಸಿ ಕುಡಿಯುವುದರಿಂದ ದೇಹ ತಂಪಾಗಿರುತ್ತದೆ ಜೊತೆಗೆ ಯಾವುದೇ ರೀತಿಯ ರೋಗಗಳು ಹತ್ತಿರ ಸುಳಿಯುವುದಿಲ್ಲ.
ಥೈರಾಡ್ ಸಮಸ್ಯೆಯಿಂದ ಬಳಲುತ್ತಿದ್ದರೆ ರಾಗಿಮುದ್ದೆ ಸೇವಿಸಿ.
ರಾಗಿಮುದ್ದೆಯ ಸೇವನೆಯಿಂದ ದೇಹವು ಗಟ್ಟಿಯಾಗುತ್ತದೆ. ಜೊತೆಗೆ ನಮ್ಮ ದೇಹದ ಕೆಟ್ಟ ಕೊಬ್ಬನ್ನು ಕರಗಿಸುತ್ತದೆ.
ಬೇಸಿಗೆಯಲ್ಲಿ ಬರುವಂತಹ ಹಲವಾರು ಸಮಸ್ಯೆಗಳನ್ನು ರಾಗಿಮುದ್ದೆ ಸೇವನೆಯಿಂದ ಗುಣಪಡಿಸಿಕೊಳ್ಳಬಹುದು.
ಆದ್ದರಿಂದ ರಾಗಿ ಕಪ್ಪು ಎಂದು ಬಿಡದೆ ಅದನ್ನು ಉಪಯೋಗಿಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಎಲ್ಲ ಔಷಧಿಗಳಿಗೂ ಫುಲ್ ಸ್ಟಾಪ್ ಇಟ್ಟುಬಿಡಿ.